3rd standard Kannada ( Chiguru)

 

ಪಾಠ-- 5 ಚಿಗುರು

I ಪದಗಳ ಅರ್ಥ ಬರೆಯಿರಿ:-

1.ಲೇಖನ ==ಬರವಣಿಗೆ.

2.ಪರಿಶೀಲಿಸು ==ಸೂಕ್ಷ್ಮವಾಗಿ ಗಮನಿಸು.

3.ಉತ್ತಮ ==ಶ್ರೇಷ್ಠ.

4.ಪ್ರಕಟಿಸು==ಗ್ರಂಥ ಲೇಖನ ಮುಂತಾದುವನ್ನು ಪ್ರಕಾಶನಕ್ಕೆ ತರು.

5.ಕುತೂಹಲ== ಅಚ್ಚರಿ .

6.ಸರಾಗವಾಗಿ ==ಸುಲಭವಾಗಿ.

7.ಚರ್ಚೆ== ಪರ್ಯಾಲೋಚನೆ.

8.ಸಲಹೆ-=ಸೂಚನೆ.

9.ಸುಭಾಷಿತ== ಒಳ್ಳೆಯ ಮಾತು.

 

II ಒಂದು ಪದದಲ್ಲಿ ಉತ್ತರಿಸಿ:-

1.ಸುದ್ದಿಯನ್ನು ಪರಿಷ್ಕರಿಸಿ ಪ್ರಕಟಿಸುವ ತಂಡ== ಸಂಪಾದಕ ಮಂಡಳಿ

2.ಶಾಲೆಯಿಂದ ಹೊರತರುವ ಪತ್ರಿಕೆ== ಶಾಲಾ ಪತ್ರಿಕೆ

3.ತಾನೇ ರಚಿಸಿದ ಸ್ವರಚಿತ ನಗುವನ್ನು ಉಂಟುಮಾಡುವ ಚುಟುಕ್ಕಾ ಮಾತು ಅಥವಾ ಬರೆಹ== ನಗೆಹನಿ

4.ಅಣಕ ದಿಂದ ಕೂಡಿದ ಚಿಕ್ಕ ಪದ್ಯ ==ಚುಟುಕು

5.ಬರೆಯುವುದಕ್ಕಾಗಿ ಕಪ್ಪು ಬಣ್ಣ ಹಚ್ಚಿರುವ ಗೋಡೆಯ ಭಾಗ ಅಥವಾ ಹಲಗೆ =ಕಪ್ಪುಹಲಗೆ

 

 

III ಹೊಂದಿಸಿ ಬರೆಯಿರಿ

1.ಲೇಖಕರ ಹೆಸರು                              ಲೇಖನದ ಹೆಸರು.

2. ಮಾಲಾ                                         ನಿಮಗಿದು ತಿಳಿದಿರಲಿ.

3.ಥಾಮಸ್                                        ನಾಡ ಹಬ್ಬ .

4.ಬೇಗಂ                                            ಗಾದೆಮಾತು .

5.ವಿನಾಯಕ                                      ಸ್ವಾಮಿ ವಿವೇಕಾನಂದ.

 

IV ಗಾದೆ ಮಾತುಗಳನ್ನು ಪೂರ್ಣಗೊಳಿಸಿ:-

1.ಆಪತ್ತಿಗಾದವನೇ ನೆಂಟ.

2.ಅತಿಯಾಸೆ ಗತಿಗೇಡು.

3.ಮಾತು ಬೆಳ್ಳಿ ಮೌನ ಬಂಗಾರ .

4.ಆಳಾಗಿ ದುಡಿ ಅರಸಾಗಿ ಉಣ್ಣು.

5.ಮಾಡಿದ್ದುಣ್ಣೋ ಮಾರಾಯ.

6.ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತದೆ.

7.ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು .

8.ಶಕ್ತಿಗಿಂತ ಯುಕ್ತಿ ಮೇಲು.

9. ಗಾದೆಯೆಂದರೆ ನಾಣ್ಣುಡಿ.

 

V ಸರಿ-ತಪ್ಪು ಗುರುತಿಸಿ:-

1.ತಪ್ಪಿಲ್ಲದೆ ಚೆನ್ನಾಗಿ ಕಾಣುವ ರೀತಿಯಲ್ಲಿ ಬರೆಯಬೇಕು ---ಸರಿ

2.ಸುಲಭವಾಗಿ ಓದಲು ಮತ್ತು ಓದಿದ್ದುಅರ್ಥವಾಗುವಂತೆ ಬರೆಯಬೇಕು-- ಸರಿ

3.ಪದಗಳಲ್ಲಿನ ಅಕ್ಷರಗಳನ್ನು ಒಂದೇ ಗಾತ್ರದಲ್ಲಿ ಬರೆಯಬಾರದು --ತಪ್ಪು

4.ಪದದಲ್ಲಿನ ಅಕ್ಷರಗಳು ಒಂದಕ್ಕೊಂದು ತಾಕದಂತೆ ಹಾಗೂ ನಡುವೆ ಸ್ಥಳ ಬಿಡದಂತೆ ಬರೆಯಬೇಕು--- ತಪ್ಪು

5.ಪದಗಳ ನಡುವೆ ಸ್ಥಳವನ್ನು ಬಿಡದೇ ಬರೆಯಬೇಕು --ತಪ್ಪು

6.ಅಕ್ಷರ ಹಾಗೂ ಸಾಲುಗಳು ಓರೆಯಾಗಿ ಇರಬಾರದು  ---ಸರಿ

 

V ಪದಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ವಾಕ್ಯ ತಯಾರಿಸಿ:-

1.ನಾಡ ನಮ್ಮ ಹಬ್ಬ ದಸರಾ.

A:-ನಮ್ಮ ನಾಡ ಹಬ್ಬ ದಸರಾ.

 

2.ಮಾತು ಜಗಳವಿಲ್ಲ ಬಲ್ಲವನಿಗೆ .

A:-ಮಾತು ಬಲ್ಲವನಿಗೆ ಜಗಳವಿಲ್ಲ.

 

3.ರಾಜ್ಯ ನಮ್ಮ ಕರ್ನಾಟಕ.

A:-ನಮ್ಮ ರಾಜ್ಯ ಕರ್ನಾಟಕ .

 

4.ಹಣ್ಣುಗಳ ಮಾವು ರಾಜ.

A:-ಹಣ್ಣುಗಳ ರಾಜ ಮಾವು.

 

VI ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-

 1.ಶಾಲಾ ಪತ್ರಿಕೆಯ ಹೆಸರೇನು?

 A:-.ಶಾಲಾ ಪತ್ರಿಕೆಯ ಹೆಸರು ಚಿಗುರು.

 

 

2.:-ನಮ್ಮ ನಾಡ ಹಬ್ಬ ಯಾವುದು?

A.ನಮ್ಮ ನಾಡ ಹಬ್ಬ ದಸರಾ.

 

3.:-ಹಣ್ಣುಗಳ ರಾಜ ಯಾರು?

A.ಹಣ್ಣುಗಳ ರಾಜ ಮಾವು.

 

4.ವಿವೇಕಾನಂದರ ಬಾಲ್ಯದ ಹೆಸರೇನು?

A:- ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ ದತ್ತ.

 

5.ಜೋಗ್ ಜಲಪಾತ ಎಲ್ಲಿದೆ?

A:-ಜೋಗ್ ಜಲಪಾತ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಹಳ್ಳಿಯಲ್ಲಿ ಇದೆ.

 

6. ಪತ್ರಿಕೆಯಲ್ಲಿ ಸತೀಶ ಬರೆದಿರುವ ಲೇಖನದ ಹೆಸರೇನು?

A:-ಈ ಪತ್ರಿಕೆಯಲ್ಲಿ ಸತೀಶ ಬರೆದಿರುವ ಲೇಖನದ ಹೆಸರು ಜಲಪಾತ.

 

7.ಚಿಗುರು ಪತ್ರಿಕೆಯಲ್ಲಿ ನಿನಗೆ ಇಷ್ಟವಾದ ಬರೆಹ ಯಾವುದು?

A:-ಚಿಗುರು ಪತ್ರಿಕೆಯಲ್ಲಿ ನನಗೆ ಇಷ್ಟವಾದ ಬರಹ ಗಾದೆ.

 

VIIಚಟುವಟಿಕೆ:-

 ಚುಕ್ಕಿ ಚಿನ್ನ ಶಾಲಾ ಪತ್ರಿಕೆಗೆ ಮೂರು ಸಾಲುಗಳ ಒಂದು ಲೇಖನವನ್ನು ಶುದ್ಧ ಬರಹದಲ್ಲಿ ಬರೆಯಿರಿ

 

 

Post a Comment

0 Comments